Sunday, January 17, 2010

ಪಯಣ .......


ಬಹಳಷ್ಟು ಜನರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದು ಎಂದರೆ ತುಂಬ ತ್ರಾಸು . ಅದರಲ್ಲೂ ಕೂರಲು ಜಾಗ ಸಿಗದೇ ಬಸ್ಸೆಲ್ಲಾ ಜನರಿಂದ ತುಂಬಿ ಹೋಗಿದ್ದರಂತೂ ಮುಗಿದೇ ಹೋಯಿತು. ಎಲ್ಲಾ ಅಸಹನೆಯನ್ನು ಅಕ್ಕ ಪಕ್ಕದವರ ಮೇಲೆ ತೋರಿಸಲು ಶುರು ಮಾಡುತ್ತಾರೆ . ಆದರೆ ಒಂದು ತಂಪು ಸಂಜೆಯಲ್ಲಿ , ಸುಂದರವಾದ ದಾರಿಯಲ್ಲಿ ಕಿಟಕಿಯಾಚೆಗೆ ಕಣ್ಣು ಹಾಯಿಸುತ್ತಾ , ನೆನಪುಗಳನ್ನು ಮೆಲುಕು ಹಾಕುತ್ತಾ ಹಾದಿಗುಂಟ ಕ್ರಮಿಸುವುದು ಮನಸ್ಸಿಗೆ ಹಿತವನ್ನೀಯುತ್ತದೆ . ಅದು ನಗರ ಪ್ರಯಾಣವಾದರೂ ಸರಿಯೇ . ಕಾಣುವ ಜನರು, ಅವರ ಹಾವ ಭಾವ ಇವುಗಳು ಕುತೂಹಲಕರವಾಗಿರುತ್ತದೆ . ಆದರೆ ಪಕ್ಕದಲ್ಲಿ ಯಾರಾದರೂ "ಕೊರಿ"ಯರ್ ಪಾರ್ಟಿ ಕುಳಿತುಬಿಟ್ಟರೆ ಇಡೀ ದಾರಿಯನ್ನು ಮೈಲುಗಟ್ಟಲೆ ಹೆಚ್ಚಿಸಿಬಿಡುತ್ತಾರೆ. ಹಳ್ಳಿ ಕಡೆ ಅದರಲ್ಲೂ ಮಲೆನಾಡಿನ ಕಡೆ ಬಸ್ಸು ಪ್ರಯಾಣ ಒಂದು ನೆನಪಿನ ಬುತ್ತಿಯೇ ಸರಿ . ಹಾವಿನ ರಸ್ತೆಗಳಲ್ಲಿ ಡ್ರೈವರನ ಪ್ರಾವೀಣ್ಯವನ್ನು ಬಾಯಿ ಬಿಟ್ಟು ನೋಡುತ್ತಾ ಗೇರ್ ಬಾಕ್ಸಿನ ಮೇಲೆ ಕಾಲು ಇಟ್ಟು ,ನಾವು ಕೂಡ ಜೀವನದಲ್ಲಿ ಮುಂದೆ ಡ್ರೈವರ್ ಆಗಬೇಕೆಂಬ ಮಹದೋದ್ದೇಶ (?) ನಮ್ಮ ಚಿಕ್ಕಂದಿನಲ್ಲಿ ಬಂದಿದ್ದು ಸುಳ್ಳಲ್ಲ ...... ನೆನೆಸಿಕೊಂಡರೆ ಮನಸ್ಸಿನಲ್ಲಿ ಈಗಲೂ ಸಹ ಗೇರ್ ಬಾಕ್ಸ್ ನ ಬಿಸುಪು !!! ಮನಸ್ಸಿನ ತುಮುಲಗಳನ್ನು ಕಳೆದುಕೊಳ್ಳಲು ಪ್ರಕೃತಿಗಿಂತಾ ಉತ್ತಮ ಗೆಳೆತಿ ಬೇಕೇ .......???

No comments:

Post a Comment