Thursday, December 3, 2009

ಚುಮು ಚುಮು...!!!!


ಜಿ.ಪಿ.ರಾಜರತ್ನಂರವರ ಸಾಲಿನಂತೆ ಮಂಜು ಈಗ ಮಡಿಕೇರಿ ಮಾತ್ರವಲ್ಲದೆ ಎಲ್ಲೆಡೆ ಹಬ್ಬತೊಡಗಿದೆ . ಬೆಳಗಿನ ಸೂರ್ಯನ ಕಣ್ಣುಮುಚ್ಚಾಲೆ, ಮುಂಜಾವದ ಸಿಹಿ ನಿದ್ರೆ, ಹೊಂಬಣ್ಣದ ಬಿಸಿಲು ಕೋಲುಗಳು, ಎಲೆತುದಿಯ ಮುತ್ತಿನ ಹನಿ.......ಆಹಾ !!!! ...ವರ್ಣಿಸಿದಷ್ಟೂ ವರ್ಣನಾಮಯ. ಮಲೆನಾಡಿನವರಿಗಂತೂ ಮಾಗಿ ಚಳಿ, ಕೊನೆ ಕೊಯ್ಲಿನ ಸಂಭ್ರಮ.....ತುಂಬಿ ಹರಿಯುವ ಶರಾವತಿ, ವರದೆಯರನ್ನು ಕಣ್ಣಲ್ಲಿ ತುಂಬಿ ಕೊಳ್ಳುವುದೇ ಒಂದು ರೋಮಾಂಚನ ..... ಅಜ್ಜಿ ಮನೆಯ ಹಿಂದಿನ ಬೆಟ್ಟದ ತುದಿಗೆ ಹೋಗಿ ಘಟ್ಟದ ಸಾಲು , ಅಡಿಕೆ ತೋಟಗಳು , ನೀರಿನ ಚಿತ್ತಾರ ....!!!ಇವುಗಳನ್ನು ನೋಡಿಯೇ ಸವಿಯಬೇಕು ...... ಸಂಜೆ ಆಯಿತೆಂದರೆ ಬಚ್ಚಲ ಬೆಂಕಿ, ಅಡಿಕೆ ಕಾಯಿಸುವ ಹಬೆ, ಅಜ್ಜನ ಭಾಗವತಿಕೆ , ಅಜ್ಜಿಯ ಕಥೆಗಳು, ಭಾವದಿಕ್ಕಳ ಹುಸಿಜಗಳ, ಕೆಲಸದವರ ಸೇಂದಿ ಹಾಡುಗಳು .......ಅದೊಂದು ಕಲ್ಪನಾ ಲೋಕವೇ ಸರಿ ....... ನಗರದ ಕಟ್ಟಡದ ಮೇಲಿನ ಇಬ್ಬನಿಯನ್ನು ಮಾತ್ರ ನೋಡಿದವರಿಗೆ ಮಲೆನಾಡು ಒಂದು ವಿಸ್ಮಯ ವಿಶ್ವ ...ಈ ಸಲವಾದರೂ ಚಳಿಗಾಲದಲ್ಲಿ ಊರಿಗೆ ಹೋಗಿ ಹಳೆಯ ನೆನಪನ್ನು ಹಸಿಗೊಳಿಸಬೇಕು ಎನ್ನುವ ಹಂಬಲ ಮಾತ್ರ , ನಮ್ಮ ಬಿಡುವಿಲ್ಲದ ಕೆಲಸದ (?) ನಡುವೆ ಒಂದು ಚಿಕ್ಕ ನಸುನಗುವನ್ನು ತರುವುದು ಸುಳ್ಳಲ್ಲ ..........!!!

No comments:

Post a Comment