skip to main |
skip to sidebar
ಎರಡು ಯುಗಾಂತ್ಯ.....
2009 ಹೋಗುತ್ತಾ ಹೋಗುತ್ತಾ , ಸಂಗೀತ ಹಾಗು ಚಿತ್ರ ಪ್ರೇಮಿಗಳಲ್ಲಿ ಒಂದು ಕಣ್ಣೀರ ಬಿಂದುವನ್ನುಳಿಸಿ ಹೋಗುತ್ತಿದೆ. ಇಹದ ನಾಟಕಕ್ಕೆ ತೆರೆ ಎಳೆದು, ಇಬ್ಬರು ಅದ್ಭುತ ಕಲಾವಿದರನ್ನು ವಿಧಿ ತನ್ನೆಡೆಗೆ ಸೆಳೆದೊಯ್ಯಿತು. ಸಿ. ಅಶ್ವಥ್ ಹಾಗು ವಿಷ್ಣುವರ್ಧನ್ ಕನ್ನಡದ ಹೃದಯಗಳಲ್ಲಿ ಮೂಡಿಸಿದ ಛಾಪು ಅಜರಾಮರ. ತಾರಕ ಗಾಯನದ ಗಾರುಡಿಗ ಮತ್ತು ಅಪೂರ್ವ ಸಂಯೋಜಕ ಅಶ್ವಥ್ ಅವರ ಮಾಯೆಗೆ ಎಂಥವರನ್ನಾದರೂ ಕರಗಿಸುವ ತಾಕತಿತ್ತು . ಭಾವಗೀತೆ ಮತ್ತು ಸುಗಮ ಸಂಗೀತದ ಬೆಳವಣಿಗೆಯಲ್ಲಿ ಅವರ ಪಾಲೇ ಹೆಚ್ಚು ಅಂದರೆ ಸುಳ್ಳಲ್ಲ . ಭಾವುಕ ಮನಸ್ಸುಗಳು ಅಶ್ವಥ್ ಕಂಠವನ್ನು miss ಮಾಡಿಕೊಳ್ಳುವುದಂತೂ ನಿಶ್ಚಿತ . ಇನ್ನು ಕನ್ನಡದ "ಸಿಂಹ" , ಡಾ. ವಿಷ್ಣುವರ್ಧನ್ ಇಷ್ಟು ಬೇಗ ಯಾತ್ರೆ ಮುಗಿಸುತ್ತಾರೆಂದು ಯಾರೂ ಎಣಿಸಿರಲಿಕ್ಕಿಲ್ಲ . ಪುಟ್ಟಣ್ಣನವರ ಶೋಧದ ಈ ಪ್ರತಿಭೆ ,ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬೆಳಗಿದ ರೀತಿ ಅದ್ಭುತ . ಇನ್ನು ಮುಂದೆ ಅವರ ನೂರೊಂದು ನೆನಪುಗಳು ಮಾತ್ರ ಎಲ್ಲರ ಎದೆಯಾಳದಲ್ಲಿ ಚಿರಸ್ಥಾಯಿ .......
No comments:
Post a Comment